ಬಡವರುದ್ಧಾರದ ಮಾತುಗಳನ್ನುದುರಿಸಿ,
ದಿನದಿನಕ್ಕೆ ಬೆಳೆದಂತಹ ಕುಬೇರರೆ,
ಬಡವರಿಗಾಗಿ ಆಶ್ರಯ, ಹುಡ್ಕೋ, ಯೋಜನೆ
ನಿಮಗಾಗಿ ಮುಗಿಲೆತ್ತರದ
ಬಂಗ್ಲೆಗಳನ್ನು ಕಟ್ಟಿಸಿಕೊಂಡವರೆ,
ಬಡವರಿಗೆ ಭಜನೆ ಮಾಡಲು ಗುಡಿಕಟ್ಟಿಸಿ
ನಿಮಗಾಗಿ ಪಂಚತಾರಾ ಕಟ್ಟಿಸಿಕೊಂಡವರೆ,
ಬಡವರಿಗೆ ದೇಶಾಭಿಮಾನದ ಮಂತ್ರ ಹೇಳಿ
ಗ್ಯಾಟ್, ಡಂಕೆಲ್ ಒಪ್ಪಂದಗಳಿಗೆ ಸಹಿ ಹಾಕಿದವರೇ,
ಸಾಮ್ರಾಜ್ಯಶಾಹಿಗಳಿಗೆ
ದೇಶವನ್ನೇ ಅಡವಿಟ್ಟ ಭೂಪರೆ ?
ದೇಶದ ಸ್ವಾಯತ್ತತೆ, ಸ್ವಾವಲಂಬನೆಯ
ಮಾತುಗಳನ್ನುದುರಿಸುತ್ತಾ
ಉದಾರೀಕರಣ – ನೆಪದಲ್ಲಿ
ದೇಶವನ್ನು ಅತಂತ್ರದ
ಸಂಕೋಲೆಯಲಿ ಸಿಕ್ಕಿಸಿದವರೆ
ಜನತೆಯ ಕಷ್ಟಗಳನ್ನು
ಸಂದರ್ಶನದ ಮೈಕ್, ಟಿ.ವಿ.
ಕ್ಯಾಮರಾಗಳಿಗೆ ಸೀಮಿತಗೊಳಿಸಿದವರೆ,
ಹಿಟ್ಲರನ ಇತಿಹಾಸ ರಚಿಸದಿರಿ
ಬ್ರೇವೆರಿಜ್ಳ ಭ್ರೂಣಕ್ಕೆ ಬೆಳೆಸದಿರಿ
ಜನತೆಯ ಮನಗಳ ಮುರಿಯದಿರಿ
ಮಹಾತ್ಮರ ಕೊಲ್ಲುವ ಗೋಡ್ಸೆಯಾಗದಿರಿ
ಬನ್ನಿ ನಿಮ್ಮ ಜನರ ಹತ್ತಿರ ಬನ್ನಿ.
*****
Related Post
ಸಣ್ಣ ಕತೆ
-
ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ
ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್ಗೆ ಕಾಲ್ಚೆಂಡು ಆಟ… Read more…
-
ಕಲ್ಪನಾ
ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…
-
ಹೃದಯದ ತೀರ್ಪು
ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…
-
ತೊಳೆದ ಮುತ್ತು
ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…
-
ಪ್ರಕೃತಿಬಲ
ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…